Thursday, October 09, 2014

ನಿನ್ನ ಒಲುಮೆಯಿಂದ - ವಿಜಯ ದಾಸರು

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೋ ಮಹರಾಯ ।
ಎನ್ನ ಪುಣ್ಯಗಲಿಂದ ಈ ಪರಿಯುಂಟೆನೊ ನಿನ್ನದೇ ಸಕಲ ಸಂಪತ್ತು ।।

ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಪೂರ್ಣವಿಚಿತ್ರ ಸುವಾಸನ ।
ವರ್ಣ ವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ ।।

ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕೆ ತಬ್ಬಿಬ್ಬುಗೊಂಡೆನೊ ಹಿಂದೆ ।
ನಿರ್ಭರದಿಂದಲಿ ಸರ್ವರ ಕೂಡುಂಬೊ ಹಬ್ಬದೂಟವ ಉಣ್ಣಿಸುವೆಯೋ ।।

ಸಂಜಿ ತನಕ ಇದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೋ ।
ವ್ಯಂಜನ ಮೊದಲಾದ ನಾನ ರಸಂಗಳ ಭುಜಿಸುವುದು ಮತ್ತೇನೋ ।।

ಮನೆ ಮನೆ ತಿರುಗಿದರು ಕಾಸು ಪುಟ್ಟದೆ ಸುಮ್ಮನೆ ಚಾಲವರಿದು ಬಳಲಿದೆನೋ ।
ಹಣ ಹೊನ್ನು ದ್ರವ್ಯಗಳಿದ್ದಲ್ಲಿಗೆ ತಾನಾಗೆ ತಾತ ಪ್ರಾಪ್ತಿ ನೊಡೋ ಜೀಯಾ ।।

ಮಧ್ಯಾನ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾವ ।
ಈ ಧರೆಯೊಳಗೆ ಸತ್ಪಾತ್ರರ ಕೂಡುಂಬೊ ಪದ್ಧತಿ ನೋಡೋ ಪುಣ್ಯಾತ್ಮ ।।

ನೀಚೊಚ್ಛ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆನೋಸಲ ಹಸ್ತಗಳ ।
ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕ್ಕೆ ನಿಲಿಕದೋ ಹರಿಯೇ ।।

ವೈದಿಕ ಪದವೀವಗೀಬಗೆ  ಲೌಕಿಕ ವೈದಿಸುವದು ಬಲು ಕ್ಯಾತೆ ।
ಮೈದುನಗೋಲಿದ ಶ್ರೀ ವಿಜಯವಿಟ್ಠಲ ನಿನ್ನ ಪಾದಸಾಕ್ಷಿಯ ಅನುಭವವೋ ।।